Wednesday, August 27, 2025
Google search engine
HomeUncategorizedಸಂಪೂರ್ಣ ಬಹುಮತ ಬರದಿದ್ದಕ್ಕೆ ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಿಲ್ವಂತೆ..!

ಸಂಪೂರ್ಣ ಬಹುಮತ ಬರದಿದ್ದಕ್ಕೆ ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಿಲ್ವಂತೆ..!

ಕೊಪ್ಪಳ : ಸಂಪೂರ್ಣ ಬಹುಮತ ಬರದಿದ್ದಕ್ಕೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ‌ ಮಾಡಲು ಆಗಲಿಲ್ಲ ಎಂದು ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಹೇಳಿದ್ದಾರೆ.
ಕೊಪ್ಪಳದ ಕನಕಗಿರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮೂಲು ಒಬ್ಬ ಮಾಸ್ ಲೀಡರ್ ಈ ಬಾರಿ ನಮ್ಮ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಮತ್ತು ಬೇರೆ ಪಕ್ಷದವರು ಬಂದಿರುವುದರಿಂದ ಶ್ರೀರಾಮೂಲು ಅವರನ್ನು ಉಪ ಮುಖ್ಯಮಂತ್ರಿ ಮಾಡಲು ಆಗಿಲ್ಲ. ಮುಂದಿನ ದಿನದಲ್ಲಿ ನಾನು ಸಹ ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಮಾಡ್ತಿನಿ ಎಂದರು.
ಬಸವರಾಜ್ ದಡೇಸುಗೂರು ಹೇಳಿಕೆಯನ್ನು ತಳ್ಳಿಹಾಕಿದ ವಾಲ್ಮೀಕಿ ಸಮಾಜದ ಯುವಕರು ಶಾಸಕರಿಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲದಿದ್ದರೆ ಗೋವಿಂದ ಕಾರಜೋಳ, ಅಶ್ವತ್ ನಾರಾಯಣ, ಲಕ್ಷಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಯಾರು..?? ಅವರೇನು ಬೇರೆ ಪಕ್ಷದಿಂದ ಬಂದವರಾ..?? ಅವರಿಗೆ ಉಪ ಮುಖ್ಯಮಂತ್ರಿ ಮಾಡುವುದಕ್ಕೆ ಆಗುತ್ತೆ. ಪಕ್ಷದ ನಿಷ್ಟಾವಂತ ಶ್ರೀರಾಮೂಲು ಅವರಿಗೆ ಮಾಡೋಕೆ ಆಗೊಲ್ವ? ನಮ್ಮ ಭಾಗದಲ್ಲಿ ಶ್ರೀರಾಮೂಲು ಅವರನ್ನು ಉಪ ಮುಖ್ಯಮಂತ್ರಿ ಮಾಡ್ತಿನಿ ಎಂದು ಹೇಳಿದಕ್ಕೆ ಬಿಜೆಪಿಗೆ ಮತ ನೀಡಿದ್ದಾರೆ.. ಗೆಲ್ಲುವಾಗ ಒಂದು ಮಾತು ಗೆದ್ದ ಮೇಲೆ ಒಂದು ಮಾತಾ..?? ಶಾಸಕರೇ ನಿಮ್ಮ ಪ್ರಶ್ನೆಗೆ ನೀವೇ ಉತ್ತರ ಕೋಡಿ.. ಏನೋ ಹೇಳಿ ನಮ್ಮ ಸಮಾಜದ ಜನರಿಗೆ ತಪ್ಪು ಮಾಹಿತಿ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments