Site icon PowerTV

ಸಿಎಂ ಕುರ್ಚಿಗೆ ಕಾಂಗ್​’ರೇಸ್​’ : ಡಿ.ಕೆ ಶಿವಕುಮಾರ್​ಗೆ ಸೈಡ್ ಹೊಡಿತಾರಾ ಎಂ.ಬಿ ಪಾಟೀಲ್​?

ವಿಜಯಪುರ : ಕಾಂಗ್ರೆಸ್​ನಲ್ಲಿ ಸಿಎಂ ಪಟ್ಟಕ್ಕಾಗಿ ರೇಸ್​ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ತಾನು ಮುಖ್ಯಮಂತ್ರಿ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಡಿ,ಕೆ ಶಿವಕುಮಾರ್ ಅವರು ಕೂಡ ತಾವು ಸಿಎಂ ಆಗಲು ಬಯಸಿರೋದಾಗಿ ಹೇಳಿಕೊಂಡಿದ್ದರು. ಇದೀಗ ಗೃಹಸಚಿವ ಎಂ.ಬಿ ಪಾಟೀಲ್ ಸಿಎಂ ಆಗುವ ಆಸೆಯನ್ನು ಹೇಳಿಕೊಂಡಿದ್ದಾರೆ.
ವಿಜಯಪುರದ ಬಬಲೇಶ್ವರದಲ್ಲಿ ಮಾತನಾಡಿದ ಅವರು, ”ನನಗೂ ಸಿಎಂ ಆಗುವ ಆಸೆ ಇದೆ, ಆದ್ರೆ ನನಗೆ ದುರಾಸೆ ಇಲ್ಲ. ಸಿದ್ದರಾಮಯ್ಯ ನಂತರ ಸಿಎಂ ರೇಸ್​ನಲ್ಲಿ ನನ್ನ ಸರದಿ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದ್ಮೇಲೆ ನಾನು ಸಿಎಂ ಆಗ್ತೀನಿ” ಎಂದಿದ್ದಾರೆ.

Exit mobile version