Site icon PowerTV

ಅನಂತಕುಮಾರ್ ಗ್ರಾ.ಪಂ. ಸದಸ್ಯನಾಗೋದಕ್ಕೂ ನಾಲಾಯಕ್​: ಸಿದ್ದರಾಮಯ್ಯ

ಕೋಲಾರ: ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲು ನಾಲಾಯಕ್ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರದಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ ಬಿಜೆಪಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿ, ಸಂವಿಧಾನ ವಿರೋಧಿ ಮಾತಾಡುವ ತೇಜಸ್ವಿ ಸೂರ್ಯಗೆ ವೋಟ್ ಹಾಕಬೇಕಾ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಮಾತನಾಡಿ, “ಮೋದಿ ಚೌಕಿದಾರ್ ಅಲ್ಲ ಭ್ರಷ್ಟಾಚಾರದಲ್ಲಿ ಭಾಗಿದಾರ್. ಭ್ರಷ್ಟಾಚಾರ ಮಾಡಿದವರ ಜೊತೆ ಮೋದಿ ಭಾಗಿದಾರ್. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ ಇವರೆಲ್ಲಾ ಚೌಕಿದಾರ್​​ಗಳಾ”? ಎಂದು ಕೇಳಿದ್ದಾರೆ.

Exit mobile version