Thursday, August 28, 2025
HomeUncategorizedಸುಮಲತಾ ಗೆದ್ರೆ ಅಂಬರೀಶ್, ಅಂಬರೀಶ್​ ಗೆದ್ರೆ ಮಂಡ್ಯದ ಜನ ಗೆದ್ದಂತೆ: ದೊಡ್ಡಣ್ಣ

ಸುಮಲತಾ ಗೆದ್ರೆ ಅಂಬರೀಶ್, ಅಂಬರೀಶ್​ ಗೆದ್ರೆ ಮಂಡ್ಯದ ಜನ ಗೆದ್ದಂತೆ: ದೊಡ್ಡಣ್ಣ

ಮಂಡ್ಯ: ಸುಮಲತಾ ಅವರು ಗೆಲ್ಲಬೇಕು. ಅವರು ಗೆದ್ರೆ ಅಂಬರೀಶ್ ಗೆಲ್ತಾರೆ. ಅಂಬರೀಶ್ ಗೆದ್ರೆ ಮಂಡ್ಯ ಗೆಲ್ಲುತ್ತೆ. ಮಂಡ್ಯದ ಸ್ವಾಭಿಮಾನಿ ಜನ ಗೆಲ್ತಾರೆ ಅಂತ ನಟ ದೊಡ್ಡಣ್ಣ ಹೇಳಿದ್ರು.

ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಕೇಬಲ್ ಕಟ್​ ಮಾಡ್ಸಿದ್ದಾರೆ ಅಂತ ಯಾರೋ ಹೇಳಿದ್ರು. ಸೂರ್ಯನಿಗೆ ಛತ್ರಿ ಹಿಡಿದು ಭೂಮಿಗೆ ಕತ್ತಲು ಮಾಡಕ್ಕಾಗುತ್ತಾ..? ದೇವರಾಣೆಗೂ ಇಲ್ಲ. ಕೇಬಲ್ ಕಟ್​ ಮಾಡ್ಸಿದವರು ಇದನ್ನು ತಿಳಿದುಕೊಳ್ಳಬೇಕು” ಅಂದ್ರು.

“ ಮಂಡ್ಯದ ಜನ ದರ್ಪ, ಅಧಿಕಾರದ ಹಿಂದೆ ಹೋಗ್ತಾರಾ..? ಅವರು ಗಂಡುಮೆಟ್ಟಿನ ನಾಡಿನ ಜನ. ಅವರಿಗೆ ಭಯವೇ ಗೊತ್ತಿಲ್ಲ. ಸೋಲು ಅನ್ನೋದು ಅವ್ರಿಗೆ ಗೊತ್ತಿಲ್ಲ. ಅಂಬರೀಶ್ ಅವರು ಅವರ ಮಗುವಿನ ಮನಸಿನಿಂದ ಜನರ ಪ್ರೀತಿ ಸಂಪಾದಿಸಿದ್ರು. ಸುಮಲತಾ ಅವರು ಗೆಲ್ಲಬೇಕು. ಶ್ರೀ ಶಕ್ತಿ, ನಮ್ಮ ತಾಯಂದಿರು ಸುಮಲತಾ ಅವರಿಗೆ ಓಟ್ ಹಾಕಿ. ಅವರು ನಿಮ್ಮ ಅಕ್ಕ, ತಂಗಿ, ನಿಮ್ಮ ಮನೆ ಮಗಳು” ಅಂತ ಹೇಳಿದ್ರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments