Site icon PowerTV

ನಿಖಿಲ್ ಬರ್ತೀನಿ ಅಂದ್ರೆ ಮಾತ್ರ ಶಿವರಾಮೇಗೌಡ್ರು ಸೀಟು ಬಿಡ್ತಾರಂತೆ…!

ಮಂಡ್ಯ : ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದು, ಎಲ್ಲಿ ಯಾರು ಕಣಕ್ಕೆ ಇಳೀತಾರೆ ಅನ್ನೋ ಚರ್ಚೆ ನಡೀತಾ ಇದೆ. ಇದೀಗ ಮಂಡ್ಯದಲ್ಲಿ ಸಂಸದ ಶಿವರಾಮೇಗೌಡ ನಾನೇ ಜೆಡಿಎಸ್ ಕ್ಯಾಂಡಿಡೇಟ್ ಅಂತ ಹೇಳಿಕೊಂಡಿದ್ದಾರೆ!
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು 6 ತಿಂಗಳು ಅಧಿಕಾರ ನಡೆಸಿದ್ದು ಸಾಕಾ..? ಇಲ್ಲ, ಈ ಚುನಾವಣೆಯಲ್ಲೂ ನಾನೇ ಕಣಕ್ಕೆ ಇಳಿಯುತ್ತೇನೆ. ಟಿಕೆಟ್ ಕೊಡಿ ಅಂತ ಜೆಡಿಎಸ್​ ವರಿಷ್ಠರಿಗೆ ಮನವಿ ಮಾಡ್ತೀನಿ’ ಅಂತ ಹೇಳಿದ್ರು.
ನಿಖಿಲ್​ ಕುಮಾರಸ್ವಾಮಿ ಅವರ ಸ್ಪರ್ಧೆ ಬಗ್ಗೆ ಕೂಡ ಮಾತಾಡಿದ ಶಿವರಾಮೇಗೌಡ್ರು, ನಾನು ನಂಗೆ ಟಿಕೆಟ್ ಕೊಡಿ ಅಂತ ಕೇಳ್ತೀನಿ. ಅಕಸ್ಮಾತ್ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ರೆ ಸ್ವಾಗತ ಕೋರುತ್ತೇನೆ. ಒಂದು ವೇಳೆ ನಿಖಿಲ್ ಬರ್ತೀನಿ ಅಂದ್ರೆ ನಾನು ಸೀಟು ಬಿಟ್ಟು ಕೊಡೋಕೆ ರೆಡಿ ಅಂತಲೂ ತಿಳಿಸಿದ್ರು.

Exit mobile version