ಪ್ರಸಕ್ತ ರಣಜಿ ಋತುವಿನ ಕರ್ನಾಟಕ ಮೊದಲ ಮ್ಯಾಚ್ ಡ್ರಾನಲ್ಲಿ ಅಂತ್ಯವಾಗಿದೆ. ಈ ಮ್ಯಾಚ್ ನಲ್ಲಿ ಕರ್ನಾಟಕ ಡ್ರಾ ಸಾಧಿಸಿದ್ರೂ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದಿದ್ರಿಂದ 3 ಅಂಕಗಳನ್ನ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ್ದ ವಿದರ್ಭ 307 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಡಿ.ನಿಶ್ಚಲ್ ಹಾಗೂ ಶರತ್ ಬಿ.ಆರ್ ಅವರ ಅಮೋಘ ಸೆಂಚುರಿ ನೆರವಿನಿಂದ 378 ರನ್ ಸಿಡಿಸಿ 71 ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಬೌಲಿಂಗ್ ದಾಳಿಗೆ ಕುಸಿದ ಹಾಲಿ ಚಾಂಪಿಯನ್ ವಿದರ್ಭ 228 ರನ್ಗಳಿಗೆ ಅಲೌಟ್ ಆಯ್ತು. ಗೆಲುವಿಗೆ 158 ರನ್ ಟಾರ್ಗೆಟ್ ಪಡೆದ ಕರ್ನಾಟಕ 4ನೇ ದಿನದಾಟದಲ್ಲಿ 6 ವಿಕೆಟ್ ನಷ್ಟಕ್ಕೆ 76 ರನ್ ಸಿಡಿಸಿತು. ಈ ಮೂಲಕ ಮ್ಯಾಚ್ ಡ್ರಾ ಆಯಿತು. 9 ವಿಕೆಟ್ ಪಡೆದ ಜೆ.ಸುಚಿತ್ ಕರ್ನಾಟಕದ ಬೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ರು.


